ನಮ್ಮ ನಾಡಿನ ಕಲೆ ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಹೋಗೋಣ : ಹರ್ಷಲ್ ಭೂಯರ್
ಬೆಳಗಾವಿ : ನಶಿಸಿ ಹೋಗುತ್ತಿರುವ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಲು ಸರ್ಕಾರ ಮಹತ್ವದ ಕಾರ್ಯ ಆರಂಭಿಸಿದೆ ಇದರಿಂದ ನಶಿಸಿ ಹೋಗುತ್ತಿರುವ ತಳಸಮುದಾಯಗಳ ಕಲೆ ,ಸಂಸ್ಕೃತಿ ಅಭಿವೃದ್ಧಿಯಾಗಬೇಕು ಇನ್ನೂ ಇಂತಹ ಅನೇಕ ತಳ ಸಮುದಾಗಳ ಕಲೆಗಳು ಮುನ್ನಲೆಗೆ ಬರಬೇಕು ಮತ್ತು ನಮ್ಮ ನಾಡಿನ ಕಲೆ ಮತ್ತು ಸಾಂಸ್ಕೃತಿಯನ್ನು ಎಲ್ಲರೂ ಉಳಿಸಿ ಬೆಳಸಿಕೊಂಡು ಹೋಗಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಹರ್ಷಲ್ ಭೂಯರ್ ಹೇಳಿದರು
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಸೋಮವಾರ (ಮಾ.06) ಏರ್ಪಡಿಸಲಾಗಿದ್ದ ನಶಿಸಿ ಹೋಗುತ್ತಿರುವ ತಳ ಸಮುದಾಯಗಳನ್ನು ಮುನ್ನೆಲೆಗೆ ತರಲು ತರಬೇತಿ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತರಬೇತಿ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಯಾದ ತಂಡ ಗಳಿಗೆ ಶುಭ ಕೋರಿ ಹೀಗೇ ನಮ್ಮ ಕಲೆ, ಸಂಸ್ಕೃತಿಯನ್ನು ಉಳಿಸಿಕೊಂಡ ಹೋಗೋಣ ಇಂತಹ ಇನ್ನೂ ಅನೇಕ ಗ್ರಾಮೀಣ ಕಲೆ ಗಳು ಬೆಳಕಿಗೆ ಬರಬೇಕು ಅವುಗಳು ನಮ್ಮ ನಾಡಿನ ಕಲೆ ಸಂಸ್ಕೃತಿ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಬೆಳೆಯಬೇಕು ಎಂದು ಹೇಳಿದರು .
ನಶಿಸಿ ಹೋಗುತ್ತಿರುವ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಲು ಸರ್ಕಾರ ಉತ್ತಮ ತರಬೇತಿ ನೀಡಿದೆ ಇದರಿಂದ ಕಲಾವಿದರು ಉತ್ತಮ ಪ್ರದರ್ಶನ ನೀಡಿದ್ದಾರೆ ಆದರೆ ಇದು ರಾಜ್ಯ ರಾಷ್ಟ್ರಮಟ್ಟದಲ್ಲಿ ಕೊಂಡಾಡುವಂತಾಗಬೇಕು ಮತ್ತು ನಮ್ಮಕಲೆ, ಸಂಸ್ಕೃತಿ ದೇಶಕ್ಕೆ ತಲುಪುವಂತಾಗಬೇಕು ಎಂದು ಹೇಳಿದರು, ಜೊತೆಗೆ ಇದಕ್ಕೆ ಸರಕಾರ 2 ಲಕ್ಷ ರೂ ಅನುದಾನ ಕೊಡ್ಬೇಕು ಎಂದು ತರಬೇತಿದರಾದ ಗೂಳಪ್ಪ ವಿಜಯನಗರ ಅವರು ಹೇಳಿದರು.
ನಶಿಸಿ ಹೋಗುತ್ತಿರುವ ವಿಶಿಷ್ಟ ಕಲೆಗಳ ತರಬೇತಿಯಲ್ಲಿ 5 ತಂಡಗಳು ಭಾಗವಹಿಸಿ ಅವುಗಳಲ್ಲಿ ಎರಡು ತಂಡಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತವೆ, ಆದ್ದರಿಂದ ಭಾಗವಹಿಸಿದ ಎಲ್ಲ ತಂಡಗಳು ಉತ್ತಮ ಪ್ರದರ್ಶನ ನೀಡಿವೆ, ಮತ್ತು ಸೋಲು ಗೆಲುವು ಮನುಷ್ಯನ ಸಹಜ ಗುಣ ಸೋತವರು ಬೇಸರಗೋಳದೆ ರಾಜ್ಯಮಟ್ಟದವರೆಗೆ ಸ್ಪರ್ಧಿಸಿದ್ದಿರಿ ಎಂಬುದು ಮಹತ್ವವಾಗಿದೆ ಎಂದು ತಿಳಿದು ಇನ್ನೂ ಮುಂದೆಯು ಕೂಡಾ ನಮ್ಮ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗೋಣ ಎಂದು ಜಿಲ್ಲಾ ಸಂಚಾಲಕರಾದ ಮಂಜುನಾಥ್ ಪಮ್ಮಾರ ಅವರು ಹೇಳಿದರು.
ಸಮಾರೋಪ ಸಮಾರಂಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕರಾದ, ಜೇನೇಶ್ವರ ಪಡನಾಡ ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ,ಕೆಂಪಮ್ಮ ಸೊಂಟನವರ, ವಾಸುದೇವ ರಾಥೋಡ, ಶಿವನಪ್ಪ ಚಂದರಗಿ ಮೈಲಾರಪ್ಪ ಮಾದರ ಕರೆಪ್ಪ ಚನ್ನವಗೊಳ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು