ವರುಣಾದಲ್ಲಿ ಸೋಲುತ್ತೇನೆ ಅನ್ನೋ ಭಯಕ್ಕೆ ಮತ್ತೊಂದು ಕ್ಷೇತ್ರದಿಂದ ಸ್ಪರ್ಧೆ ಮಾಡಲು ಹೊರಟ್ಟಿದ್ದಾರೆ, ಸಿದ್ದರಾಮಯ್ಯನವರು 224 ಕ್ಷೇತ್ರ ಸ್ಪರ್ಧೆ ಮಾಡಲಿ ಎಂದ ವ್ಯಂಗ್ಯ ಮಾಡಿದ ಜೋಶಿ
ಬೆಳಗಾವಿ : ನಗರದಲ್ಲಿ ಇಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ ಅಭ್ಯರ್ಥಿಗಳ ಆಯ್ಕೆ ಚುನಾವಣೆ ತಯಾರಿ ಬಗ್ಗೆ ಇವತ್ತು ಸಮಾಲೋಚನೆ ಮಾಡುತ್ತೇವೆ. ಕಾಂಗ್ರೆಸ್ ಪಕ್ಷದ ರೀತಿ ನಮ್ಮದು ಪರಿವಾರದ ಪಾರ್ಟಿ ಅಲ್ಲ. ನಮ್ಮದು ಡೆಮಾಕ್ರಟಿಕ್ ಪಾರ್ಟಿ, ಅದರ ಅಡಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಆಗುತ್ತೆ. ಕಾಂಗ್ರೆಸ್ ಪಾರ್ಟಿ ಸುಳ್ಳು ಆಶ್ವಾಸನೆ ಕೊಡುವುದರಲ್ಲಿ ಎಕ್ಸಪರ್ಟ್. ಗ್ಯಾಸ್ ಸಿಡಿಲಿಂಡರ್ ಗೆ ಹಣ ಕೊಡ್ತೇವಿ, ಹೆಣ್ಣು ಮಕ್ಕಳಿಗೆ ದುಡ್ ಕೊಡ್ತೇವಿ ಅಂತ ಹೇಳ್ತಾರೆ. ಇವರ ಕಾಲದಲ್ಲಿ ಬೆಲೆ ಏರಿಕೆ ಎಷ್ಟಿತ್ತು ಎಂದು ಪ್ರಶ್ನೆ ಮಾಡಿದ ಜೋಶಿ.
ಒಂದು ಕುಟುಂಬಕ್ಕೆ ವರ್ಷಕ್ಕೆ 78 ಸಾವಿರ ಕೊಡ್ತೇವಿ ಅಂತ ಹೇಳ್ತಿದ್ದಾರೆ. ಗ್ಯಾರಂಟಿ ಕಾರ್ಡ್ ಕೊಡ್ತೇವಿ ಅಂತ ಹೇಳ್ತಿದ್ದಾರೆ ಅವರು ಏನು ಹೇಳ್ತಾರೋ ಅದನ್ನ ಮಾಡೋದೇ ಇಲ್ಲ.
ಡಿಕೆ ಶಿವಕುಮಾರ್ ಅವರಿಂದ ಬಿಜೆಪಿ ಶಾಸಕರಿಗೆ ಕರೆ ಮಾಡ್ತಿರುವ ವಿಚಾರ ವಾಗಿ ಮಾತನಾಡಿದ ಅವರು ಕಾಂಗ್ರೆಸ್ ನವರು ಭ್ರಮನಿರಸಗೊಂಡಿದ್ದಾರೆ. ಸಿದ್ದರಾಮಯ್ಯ ಇಡೀ ರಾಜ್ಯದಲ್ಲಿ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸಿದ್ದರಾಮಯ್ಯನವರಿಗೆ ಇನ್ನೂ ಸಹ ಕ್ಷೇತ್ರ ಸಿಕ್ಕಿಲ್ಲ. ವರುಣಾದಲ್ಲಿ ಸ್ಪರ್ಧೆ ಮಾಡ್ತೇನಿ ಅಂತಿದ್ದಾರೆ. ಅಪ್ಪನಿಗಾಗಿ ಮಗ ದೊಡ್ಡ ತ್ಯಾಗ ಮಾಡಿದ ರೀತಿ ಬಿಂಬಿಸಿಕೊಳ್ತಿದ್ದಾರೆ. ವರುಣಾದಲ್ಲಿ ಸೋಲುತ್ತೇನೆ ಅನ್ನೋ ಭಯಕ್ಕೆ ಮತ್ತೊಂದು ಕ್ಷೇತ್ರದಿಂದ ಸ್ಪರ್ಧೆ ಮಾಡಲು ಹೊರಟ್ಟಿದ್ದಾರೆ. ಕೋಲಾರ ಸೇರಿದಂತೆ ಬೇರೆ ಬೇರೆ ಕಡೆ ಕ್ಷೇತ್ರ ಹುಡುಕುತ್ತಿದ್ದಾರೆ. ಸಿದ್ದರಾಮಯ್ಯನವರು 224 ಕ್ಷೇತ್ರ ಸ್ಪರ್ಧೆ ಮಾಡಲಿ ಎಂದು ಜೋಶಿ ವ್ಯಂಗ್ಯ ಮಾಡಿದರು.
*ದೇಶದಲ್ಲೇ ಕಾಂಗ್ರೆಸ್ ಪಾರ್ಟಿ ಇಸ್ ರಿಜೆಕ್ಟ್ ಪಾರ್ಟಿ ಎಂದ ಜೋಶಿ.* ಮುಂಬರುವ ರಾಜಸ್ಥಾನ, ಛತ್ತೀಸಗಡ್ ರಾಜ್ಯದಲ್ಲೂ ಕಾಂಗ್ರೆಸ್ ಸೋಲುತ್ತೆ. ಈ ಬಾರಿ ರಾಜ್ಯದಲ್ಲಿ ಮೋದಿಯವರ ಕೆಲಸ ನೋಡಿ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದರು.
ಟಿಕೆಟ್ ಕುರಿತು ರಮೇಶ್ ಜಾರಕಿಹೊಳಿ ಹಾಗೂ ಸವದಿ ಬಹಿರಂಗ ಹೇಳಿಕೆ ವಿಚಾರ ಅವರಿಬ್ಬರಿಗೂ ಬಹಿರಂಗವಾಗಿ ಮಾತಾಡದಂತೆ ಈಗಾಗಲೇ ತಾಕೀತು ಮಾಡಿದ್ದೇವೆ. ಎಲ್ಲವನ್ನೂ ಗಮನಿಸುತ್ತಿದ್ದೆವೆ ಮತ್ತು ಎಲ್ಲವನ್ನೂ ಸರಿ ಮಾಡ್ತೇವಿ. ಬೆಳಗಾವಿಯಲ್ಲಿ ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ ಎಂದ ಜೋಶಿ.